• ನಮ್ಮ ಬಗ್ಗೆ
  • Profile
  • Feedback

Karnataka.com

Karnataka is a state in Southern India. Karnataka is best known for its software industry and now biotechnology.

  • Home
  • Education
  • Real-Estate
  • Government
  • Industry
  • Tourism
  • Festivals
  • Restaurants

Home » Government » ಕರ್ನಾಟಕದಲ್ಲಿ ಮರಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕದಲ್ಲಿ ಮರಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

August 3, 2020 by Jolad Rotti

ಕರ್ನಾಟಕದಲ್ಲಿ ಮರಣ ನೋಂದಾಣಿ ಪತ್ರಕ್ಕೆ ಅರ್ಜಿ ಸಲ್ಲಿಕೆ ಹೇಗೆ? ಕರ್ನಾಟಕದಲ್ಲಿ ಮರಣವನ್ನು ಏಕೆ ನೋಂದಾಯಿಸಿಕೊಳ್ಳಬೇಕು? ಕರ್ನಾಟಕದಲ್ಲಿ ಮರಣ ನೋಂದಾವಣೆ ಹೇಗೆ ಹಾಗೂ ನೋಂದಣಿ ಪ್ರಮಾಣ ಪತ್ರ ಪಡೆಯುವುದು ಹೇಗೆ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಕರ್ನಾಟಕ ಜನನ ಹಾಗೂ ಮರಣ ನೋಂದಣೆ ಕಾಯ್ದೆ 1969ರ ಪ್ರಕಾರ, ಕರ್ನಾಟಕದಲ್ಲಿ ಸಂಭವಿಸುವ ಎಲ್ಲಾ ಮರಣಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು. ಕರ್ನಾಟಕದಲ್ಲಿ ಈಗ ಮರಣಪಟ್ಟ ವ್ಯಕ್ತಿಗಳ ಡಿಜಿಟಲ್ ದತ್ತಾಂಶ ದೊರೆಯುತ್ತದೆ. ಇದಕ್ಕಾಗಿ ನಾವು ಡಿಜಿಟಲ್ ತಂತ್ರಜ್ಞಾನಕ್ಕೆ ವಂದನೆ ಹೇಳಲೇಬೇಕು. ಕರ್ನಾಟಕದಲ್ಲಿ ಈಗ ಶತಮಾನಗಳಷ್ಟು ಹಳೆಯದಾದ ಸಾವಿನ ದಾಖಲೆಗಳು ಡಿಜಿಟಲ್ ಮಾದರಿಯಲ್ಲಿ ಲಭ್ಯವಿದೆ.

ಆಸ್ತಿ ವಿವಾದಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು, ರಾಜ್ಯದಲ್ಲಿ ಮರಣಪತ್ರಗಳ ಕೋರಿಕೆ ಇಡಲಾಗುತ್ತದೆ. ಡಿಜಿಟಲ್ ನೋಂದಾವಣಿ ಆರಂಭವಾಗುವ ಮುನ್ನ ಕೂಡಾ, 2010ರ ಬಳಿಕ ತೀರಿಕೊಂಡ ವ್ಯಕ್ತಿಗಳ ದಾಖಲೆಗಳು ಈಗ ಆನ್‍ಲೈನ್‍ನಲ್ಲಿ ಲಭ್ಯವಿದೆ.

Death Certificate In Karnataka

ಕರ್ನಾಟಕದಲ್ಲಿ ಮರಣಗಳ ನೋಂದಣಿ ಏಕೆ?

* ನೋಂದಣಿ ಮೂಲಕ, ಓರ್ವ ವ್ಯಕ್ತಿಯ ಸಾವಿನ ಸ್ಥಳದ ದಾಖಲೆ ಪಡೆಯಬಹುದು. ಇದನ್ನು ಸಾಕ್ಷ್ಯವಾಗಿ ಬಳಸಬಹುದು.

* ಒಂದು ನಿರ್ದಿಷ್ಟ ಸ್ಥಳದಲ್ಲಿ, ಸಂಭವಿಸುವ ಸಾವಿನ ಬಗ್ಗೆ ಕಾನೂನು ಬದ್ದ ದಾಖಲೆಯಾಗುತ್ತದೆ.

* ಸಾಮಾಜಿಕ-ಆರ್ಥಿಕ ಯೋಜನೆ ರೂಪಿಸಲು ಅಗತ್ಯವಾದ, ಜನಸಂಖ್ಯಾ ದಾಖಲೆಯಾಗಿ ಇದನ್ನು ಬಳಸಲಾಗುತ್ತದೆ. ಜೊತೆಗೆ ಜನಂಖ್ಯಾ ನಿಯಂತ್ರಣ ಯೋಜನೆ ಹಾಗೂ ಆರೋಗ್ಯ ಯೋಜನೆ ಜಾರಿಗೆ ನೆರವಾಗುತ್ತದೆ.

* ಆಸ್ತಿ ಹಕ್ಕು ಹಾಗೂ, ಪಿತ್ರಾರ್ಜಿತ ಆಸ್ತಿ ಮೇಲಣ ವಾರಸುದಾರಿಕೆ ನಿರ್ಧರಿಸಲು 

* ವಿಮಾ ಮೊತ್ತ ಪಡೆಯಲು

* ಕೌಟುಂಬಿಕ ಪಿಂಚಣಿ ಪಡೆಯಲು

ಮರಣ ನೋಂದಣಿ: ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು

* ಒಬ್ಬ ವ್ಯಕ್ತಿಯ ಮರಣದ 21ನೇ ದಿನದ ಒಳಗೆ, ಮರಣದ ಮಾಹಿತಿ ನೀಡಬೇಕು.

* ಅರ್ಜಿ ನಮೂನೆಯನ್ನು ಉಚಿತವಾಗಿ ಜನನ/ ಮರಣ ನೋಂದಣಿ ಕಚೇರಿಯಿಂದ ಪಡೆಯಬಹುದು.

* ಯಾವುದೇ ವ್ಯಕ್ತಿ ಸಂಬಂಧಪಟ್ಟವರ ಮರಣವನ್ನು ನಿರ್ಲಕ್ಷ್ಯದಿಂದ ವರದಿ ಮಾಡದಿದ್ದರೆ/ ನೋಂದಣಿ ಮಾಡದಿದ್ದರೆ ಅವರ ವಿರುದ್ಧ ದಂಡ/ ಶಿಕ್ಷೆ ವಿಧಿಸುವ ಅವಕಾಶ ಕಾನೂನಿನಲ್ಲಿದೆ.

ಸಂಬಂಧಪಟ್ಟ ಅಧಿಕಾರಿಗಳು, ತಮ್ಮ ವ್ಯಾಪ್ತಿಯಲ್ಲಿ ಸಂಭವಿಸುವ ಸಾವುಗಳು ನಿಗದಿತ ಅವಧಿಯಲ್ಲಿ ನೋಂದಾಯಿತಗೊಂಡು, ಮರಣ ಪತ್ರ ಸಕಾರದಲ್ಲಿ ದೊರೆಯುವಂತೆ ಮಾಡುವ ಜವಾಬ್ದಾರಿ ಹೊಂದಿದ್ದಾರೆ.

ಕರ್ನಾಟಕದಲ್ಲಿ ಮರಣ ನೋಂದಣಿ: ಯಾರು ಮಾಹಿತಿ ನೀಡಬೇಕು.

ಕರ್ನಾಟಕ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಪ್ರಕಾರ, ಈ ಕೆಳಗ್ಗೆ ಉಲ್ಲೇಖಿಸಿದ ವ್ಯಕ್ತಿಗಳು/ ಸಂಸ್ಥೆಗಳು ಮರಣವನ್ನು ಹಾಗೂ ಮರಣ ಸಂಭವಿಸಿದ ಸ್ಥಳದ ಮಾಹಿತಿ ನೀಡಬೇಕು

ಸಂಸ್ಥೆಗಳು: ಆಸ್ಪತ್ರೆಗಳು, ಆರೋಗ್ಯ ವ್ಯವಸ್ಥೆಗಳು, ನಸಿಂಗ್‍ಹೋಮ್ ಇತ್ಯಾದಿಗಳು, ವೈದ್ಯಕೀಯ ಅಧಿಕಾರಿಗಳು, ಅಥವಾ ವೈದ್ಯಕೀಯ ಅಧಿಕಾರಿಗಳಿಂದ ನಿರ್ದೇಶಿಸಲ್ಪಟ್ಟವರು, ಬಂಧಿಖಾನೆ ಅಧಿಕಾರಿಗಳು, ಜೈಲಿನ ಮುಖ್ಯ ಅಧಿಕಾರಿಗಳು, ಹೊಟೆಲ್, ಧರ್ಮಶಾಲೆ, ಚೌಟ್ಟ್ರಿ, ಹಾಸ್ಟೆಲ್‍ನ ಅಧಿಕಾರಿಗಳು ಇತ್ಯಾದಿ.

ಸಾರ್ವಜನಿಕ ಸ್ಥಳ: ಓರ್ವ ವ್ಯಕ್ತಿಯ ಮೃತದೇಹ ಸಾರ್ವಜನಿಕ ಸ್ಥಳದಲ್ಲಿ ಪತ್ತೆಯಾದರೆ (ಶವ ಅನಾಥವಾಗಿದ್ದರೆ), ಸ್ಥಳೀಯ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ.

ಸಾವು ಚಲಿಸುತ್ತಿರುವ ವಾಹನದಲ್ಲಿ ಸಂಭವಿಸಿದರೆ, ವಾಹನದ ಕಾನೂನು ಬದ್ಧ ಮಾಲೀಕ.

ತೋಟ: ಸ್ಥಳದ ಮುಖ್ಯಾಧಿಕಾರಿ.

ಮರಣ ನೋಂದಣೆಗೆ ಆಧಾರ್ ಕಡ್ಡಾಯ

ಕರ್ನಾಟಕದಲ್ಲಿ ಮರಣ ನೋಂದಾವಣೆಗೆ ಆಧಾರ್ ಕಡ್ಡಾಯ. ಸ್ಥಳೀಯ ಸಂಸ್ಥೆಗೆ ಮೃತರ ಮಾಹಿತಿ ನೀಡುವಾಗ ಯಾವುದೇ ಮಾಹಿತಿ ತಪ್ಪಾಗಬಾರದು ಎಂಬ ಕಾರಣಕ್ಕೆ ಅಂತ್ಯಕ್ರಿಯೆಯ ಸಂದರ್ಭದಲ್ಲೂ ಆಧಾರ್ ಮಾಹಿತಿ ನೀಡುವುದು ಕಡ್ಡಾಯ.

ವೈದ್ಯರು ಯಾವಾಗ ಸಾವನ್ನು ದೃಢೀಕರಿಸಬೇಕು?

ಯಾವುದಾದರೂ ವ್ಯಕ್ತಿಯ ಅನಾರಾಗ್ಯದ ಕಾರಣಕ್ಕಾಗಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾಗಲೆ ತೀರಿಕೊಂಡರೆ, ವೈದ್ಯರು, ಆ ವ್ಯಕ್ತಿಯ ಸಾವಿನ ಕಾರಣವನ್ನು ತಿಳಿಸಿ, ಮರಣ ನೋಂದಣೆ ಪತ್ರದಲ್ಲಿ  ಸಹಿ ಮಾಡಬೇಕು ಇದನ್ನು ಮರಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗೆ ಸಾವಿನ ವರದಿ ಜೊತೆಗೆ ಕಳುಹಿಸಬೇಕು.

ಹಿಂಸಾತ್ಮಕ ಸಾವು ಹಾಗೂ ಇತರ ವೈದ್ಕಕೀಯ ಕಾನೂನು ಪ್ರಕರಣಗಳಲ್ಲಿ, ವೈದ್ಯಕೀಯ ಪರೀಕ್ಷಕರು ಈ ನಮೂನೆಯನ್ನು ದೃಡಪಡಿಸಬೇಕು.

ನೈಸರ್ಗಿಕ ವಿಪತ್ತಿನ ಸಂದರ್ಭಗಳಲ್ಲಿ ಕಂದಾಯ ಇಲಾಖೆ, ಮನೆ ಮನೆ ಹಂತದಲ್ಲಿ ಸಾವನ್ನು ನೋಂದಣಿ ಮಾಡಿ, ಮರಣ ಪತ್ರವನ್ನು ವಿತರಿಸುತ್ತದೆ.

ವಿದೇಶಗಳಲ್ಲಿ ಸಂಭವಿಸುವ ಸಾವು

ದೇಶದ ಹೊರಕ್ಕೆ ಸಂಭವಿಸುವ ಸ್ಥಳೀಯರ  ಸಾವನ್ನು ಕರ್ನಾಟಕದಲ್ಲಿ ನೋಂದಣಿ ಮಾಡಲು ಸಾಧ್ಯವಿಲ್ಲ. ಅದನ್ನು ವಿದೇಶಗಳಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿಗಳಲ್ಲಿ ನಾಗರಿಕತ್ವ ಕಾಯ್ದೆ 1955ರ ಅನುಸಾರ ಮಾಡಬೇಕಿದೆ. ಕಾನ್ಸುಲೇಟ್ ಕಚೇರಿ ಮರಣ ನೋಂದಣಿ ಪತ್ರ ನೀಡುತ್ತದೆ.

ಕರ್ನಾಟಕದಲ್ಲಿ ಮರಣ ನೋಂದಣಿ ಪತ್ರಕ್ಕೆ ಅರ್ಜಿ ಸಲ್ಲಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಥವಾ ಇತರ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆನ್‍ಲೈನ್ ಮೂಲಕ ಮರಣ ನೋಂದಣಿ ಪತ್ರಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಮರಣವನ್ನು ಸ್ಥಳೀಯ ಸಂಸ್ಥೆಗಳಲ್ಲಿ ಸಾವು ಸಂಭವಿಸಿದ 21 ದಿನಗಳ ಒಳಗೆ ನೋಂದಾಯಿಸಬೇಕು.

  • ಮರಣ ನೋಂದಣೆ ಪತ್ರಕ್ಕೆ ಇಲ್ಲಿಗೆ ಭೇಟಿ ನೀಡಬೇಕು. 
  • ಮರಣ ಪತ್ರಗಳ ಆನ್‍ಲೈನ್ ದೃಡೀಕರಣಕ್ಕೆ ಕೂಡಾ ಬಿಬಿಎಂಪಿ ವೆಬ್‍ಸೈಟ್ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳ ವೆಬ್‍ಸೈಟ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ.
  • ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮರಣ ನೋಂದಣಿ ಪತ್ರದ ಡೌನ್‍ಲೋಡ್ ಮಾಡಲು ಇಲ್ಲಿಗೆ ಭೇಟಿ ನೀಡಿ
  • ಗ್ರಾಮೀಣ ಪ್ರದೇಶಗಳಲ್ಲಿ ಈ ವೆಬ್‍ಸೈಟ್ ಎಲ್ಲಾ ಮರಣಗಳ ಕುರಿತ ಮಾಹಿತಿ ನೀಡುತ್ತದೆ.
  • ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ನೋಂದಣಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತಿತರ ಸರಕಾರಿ ವೈದ್ಯಕೀಯ ಸಂಸ್ಥೆಗಳ ಅಧಿಕಾರಿಗಳು ಈ ನೋಂದಣಿ ಪತ್ರವನ್ನು ಭರ್ತಿ ಮಾಡಿ, ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡುತ್ತಾರೆ.
  • ನಾಡ ಕಚೇರಿಗಳಲ್ಲಿ ಮರಣ ನೋಂದಣಿ ಪತ್ರದ ಹೆಚ್ಚುವರಿ ಪ್ರತಿಗಳು ಹಾಗೂ ತಿದ್ದುಪಡಿಗಳನ್ನು ಮಾಡಲು ಅವಕಾಶವಿದೆ.
  • In English: How To Apply For Death Certificate In Karnataka
×

Filed Under: Government Tagged With: death certificate, how to, ಅರ್ಜಿ ಸಲ್ಲಿಸುವುದು, ಮರಣ ಪಾತ್ರ

Social

Top Posts

  • ಹಂಪಿಯ ಬಗ್ಗೆ ನಿಮಗೆ ತಿಳಿದಿರದ ೧೦ ಸಂಗತಿಗಳು!
    ಹಂಪಿಯ ಬಗ್ಗೆ ನಿಮಗೆ ತಿಳಿದಿರದ ೧೦ ಸಂಗತಿಗಳು!
  • ಕರ್ನಾಟಕದಲ್ಲಿ ವಿವಾಹ ನೋಂದಣಿ ಪತ್ರ ಪಡೆಯುವುದು ಹೇಗೆ?
    ಕರ್ನಾಟಕದಲ್ಲಿ ವಿವಾಹ ನೋಂದಣಿ ಪತ್ರ ಪಡೆಯುವುದು ಹೇಗೆ?
  • ಕರ್ನಾಟಕದಲ್ಲಿ ಚುನಾವಣಾ ಗುರುತಿನ ಚೀಟಿಗೆ ಅರ್ಜಿ  ಸಲ್ಲಿಕೆ  ಹೇಗೆ?
    ಕರ್ನಾಟಕದಲ್ಲಿ ಚುನಾವಣಾ ಗುರುತಿನ ಚೀಟಿಗೆ ಅರ್ಜಿ ಸಲ್ಲಿಕೆ ಹೇಗೆ?
  • ಕರ್ನಾಟಕದಲ್ಲಿ ಮರಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
    ಕರ್ನಾಟಕದಲ್ಲಿ ಮರಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
  • ಮನೆ ಬಾಗಿಲಿಗೆ ಸೇವೆ ಒದಗಿಸಲಿರುವ "ಜನ ಸೇವಕ"
    ಮನೆ ಬಾಗಿಲಿಗೆ ಸೇವೆ ಒದಗಿಸಲಿರುವ "ಜನ ಸೇವಕ"
  • ಕೋಲಾರದ ಕೀರ್ತಿ ಕೋಟಿಲಿಂಗೇಶ್ವರ ದೇವಾಲಯ
    ಕೋಲಾರದ ಕೀರ್ತಿ ಕೋಟಿಲಿಂಗೇಶ್ವರ ದೇವಾಲಯ
  • ಸಕಲ ಭಾಗ್ಯವಿದಾತೆ ಗೊರವನಹಳ್ಳಿ ಮಹಾಲಕ್ಷ್ಮಿ
    ಸಕಲ ಭಾಗ್ಯವಿದಾತೆ ಗೊರವನಹಳ್ಳಿ ಮಹಾಲಕ್ಷ್ಮಿ
  • ಬೆಂಗಳೂರಿನಲ್ಲಿ ಆನ್‍ಲೈನ್ ಎಫ್‍ಐಆರ್ ಹಾಗೂ  ಕಳ್ಳತನ   ಬಗ್ಗೆ ಇ-ರಿಪೋರ್ಟ್
    ಬೆಂಗಳೂರಿನಲ್ಲಿ ಆನ್‍ಲೈನ್ ಎಫ್‍ಐಆರ್ ಹಾಗೂ ಕಳ್ಳತನ ಬಗ್ಗೆ ಇ-ರಿಪೋರ್ಟ್
  • ಇ ಖಾತಾ: ಇದು ಭೌತಿಕ ದಾಖಲೆಯಷ್ಟೇ ಸ್ವೀಕಾರಾರ್ಹ
    ಇ ಖಾತಾ: ಇದು ಭೌತಿಕ ದಾಖಲೆಯಷ್ಟೇ ಸ್ವೀಕಾರಾರ್ಹ
  • ಸುಧಾ ಮೂರ್ತಿ - ಅಸಾಧಾರಣ ಸಾಧಕಿ, ದಾನಿ ಮತ್ತು ಲೇಖಕಿ
    ಸುಧಾ ಮೂರ್ತಿ - ಅಸಾಧಾರಣ ಸಾಧಕಿ, ದಾನಿ ಮತ್ತು ಲೇಖಕಿ

Recent Posts

  • ಭಕ್ತರ ಹರಸುತ್ತಿರುವ ಶ್ರೀ ಭೂ ವರಾಹಸ್ವಾಮಿ ದೇವಾಲಯ
    January 26, 2023
    ಮೈಸೂರು ಎಂದರೆ ದೇಗುಲಗಳ ನಾಡು. ಇಲ್ಲಿ ಹಳ್ಳಿ ಹಳ್ಳಿಗಳ್ಲಲೂ […]
  • ವಿದ್ಯಾಶಂಕರ ದೇವಾಲಯ, ಚಿತ್ರ ಕೃಪೆ: ಕಾಲ್ವಿನ್ಕ್ರಿಷಿ, Vidyashankara Temple, Sringeriಜ್ಞಾನ ದೇವತೆಯ ದೇಗುಲ ಶೃಂಗೇರಿ  ಶಾರದಾ ಪೀಠ
    October 8, 2022
    ಶೃಂಗೇರಿ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ, […]
  • near Mysore, chamundi hills, mysore, mysore sightseeingಕನ್ನಡ ನೆಲದ ನಾಡದೇವತೆ ಮೈಸೂರಿನ  ಶ್ರೀ ಚಾಮುಂಡೇಶ್ವರಿ
    October 1, 2022
    ಈ ಭಜನಾ ಪದ್ಯ ಕೇಳಿ ಬಾರದ ಮನೆಗಳು ಕರ್ನಾಟಕದಲ್ಲಿಲ್ಲ. ಈ ಭಜನೆ […]
  • Nalvadi Krishnaraja Wodeyar-IV. Image courtesy V & A Collectionಆಧುನಿಕ ಕನ್ನಡ ನಾಡಿನ ನಿರ್ಮಾತೃ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್
    July 31, 2022
    ಕನ್ನಡ ನಾಡಿನ ಪ್ರಾತಃ ಸ್ಮರಣೀಯ ವ್ಯಕ್ತಿಗಳಲ್ಲಿ ಒಬ್ಬರು ಆಧುನಿಕ […]
  • Narendra Modi doing Yogaಮೈಸೂರು ಯೋಗ ನಗರಿಯಾದ ಇತಿಹಾಸ
    June 3, 2022
    ಮೈಸೂರು ಎಂದ ಕೂಡಲೇ ನಮ್ಮ  ಮನ್ಸಸ್ಸಿನಲ್ಲಿ ಮೂಡುವ ಚಿತ್ರಣ […]

Tags

coronavirus Hampi sightseeing hampi temple how to temples Vijayanagara Empire ಕೊರೊನ ವೈರಸ್ ಕೋವಿಡ್ ೧೯ ದೇಗುಲಗಳು ಲೋಟಸ್ ಮಹಲ್ ವಿಜಯ ನಗರ ಸಾಮ್ರಾಜ್ಯ ಹಂಪಿ ಹಂಪಿ ದರ್ಶನ ಹಂಪಿ ದೇಗುಲಗಳು ಹಂಪಿ ಸ್ಮಾರಕ ದರ್ಶನ
Airport Commute
Home | About Us | Feedback | Disclaimer | Sitemap
Copyright © 2023 karnataka.com.
This website uses cookies to improve your experience. We'll assume you're ok with this, but you can opt-out if you wish.Accept Read More
Privacy & Cookies Policy

Privacy Overview

This website uses cookies to improve your experience while you navigate through the website. Out of these cookies, the cookies that are categorized as necessary are stored on your browser as they are essential for the working of basic functionalities of the website. We also use third-party cookies that help us analyze and understand how you use this website. These cookies will be stored in your browser only with your consent. You also have the option to opt-out of these cookies. But opting out of some of these cookies may have an effect on your browsing experience.
Necessary
Always Enabled
Necessary cookies are absolutely essential for the website to function properly. This category only includes cookies that ensures basic functionalities and security features of the website. These cookies do not store any personal information.
Non-necessary
Any cookies that may not be particularly necessary for the website to function and is used specifically to collect user personal data via analytics, ads, other embedded contents are termed as non-necessary cookies. It is mandatory to procure user consent prior to running these cookies on your website.
SAVE & ACCEPT
 

Loading Comments...